ತಲೆ ಇಲ್ಲದವರು

ರಾಮನಾಳಿದರೇನು?
ರಾವಣನೇ ಆಳಿದರೇನು?
ನಮ್ಮ ಕಷ್ಟ ಹರಿಯಲಿಲ್ಲ
ಭ್ರಷ್ಟಾಚಾರ ಹೋಗಲಿಲ್ಲ
ಬೆಲೆ ಏರಿಕೆ ನಿಲ್ಲಲ್ಲ.
“ಖದೀಮರ ಕೊನೆಯ ತಾಣ
ರಾಜಕೀಯ” ಎಂದು
ತಿಳಿದೂ… ತಿಳಿದೂ…
ಪುಢಾರಿಗಳನ್ನು ನಂಬುವ
ನಾವು… ತಲೆ ಇಲ್ಲದವರು.

ಸತ್ಯ ಹೇಳಿದರೆ ನಂಬುವವರಾರು?
“ಸತ್ಯ ಹೇಳಿದರೆ ಸುಡುಗಾಡೇ ಗತಿ”,
“ಗೆದ್ದವ ಸೋತ, ಸೋತವ ಸತ್ತ”
ಎಂದೆಲ್ಲ ತಿಳಿದಿದ್ದರೂ,
ಛಲದಿಂದ ಧುಮುಕುವ
ನಾವು…. ತಲೆ ಇಲ್ಲದವರು.

ಮಳೆಯಲ್ಲಿ ಬಸ್ಸಿಗಾಗಿ ಕಾಯುತ್ತಾ
ನಿಂತವಳಿಗೆ ಡ್ರಾಪ್ ಕೊಡಲು ಬಂದ
ಸಹೋದ್ಯೋಗಿಯ ತಿರಸ್ಕರಿಸಿ
“ಆಟೋದಲ್ಲೇ ಹೋಗುವೆ” ಎಂದ
ಮುಖ ತಿರುವಿದ, ಪತಿವ್ರತೆ (?)
ಆಟೋದವನಿಂದ ರೇಪಾದ
ಸುದ್ದಿ ಕೇಳಿದಾಗ! ಗಾಬರಿ…
ಅಯ್ಯೋ ಪಾಪ… ಎನಿಸಿದರೂ…
“ಕುರಿ ನಂಬುವುದೇ ಕುರುಬನನ್ನು”
ಎಂದು ತಿಳಿದೂ, ಇಂತಹವರಿಗೆ
ಸಹಾಯ ಮಾಡಲು ಹೋಗುವ
ನಾವು… ತಲೆ ಇಲ್ಲದವರು.
*****
೧೮-೦೮-೧೯೮೭

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೇವ ಕರುಣಿಸು
Next post ನಾಯಿ ಬಾಯಿಗೆ ಚಿಂದಿಯಾದ ಪೈಜಾಮ…!

ಸಣ್ಣ ಕತೆ

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

cheap jordans|wholesale air max|wholesale jordans|wholesale jewelry|wholesale jerseys